ಈ ಜೀವಂತ ನೆಲದ ಮೇಲೆ

ಅಲ್ಲಿ ಗಾಢ ವಾಸನೆಯ
ಸತ್ತ ಒಣಕಲು ಮೀನು
ಕತ್ತರಿಸಿದ ಹೊಗೆಸೊಪ್ಪಿನ
ಮುರುಕಲು ತುಂಡು
ಸುಟ್ಟ ಸುಣ್ಣದ ಕಲ್ಲು
ತುಂಡರಿಸಿ ಬಿದ್ದ
ಒಣ ಅಡಿಕೆ ಚೂರು
ಗರಿಗುಡುತಿರುವ
ಒಣ ಮೆಣಸು
ಜಜ್ಜಿ ಬೀಜ ಬೇರ್ಪಡಿಸಿದ
ಹುಣಸೆ
ಬಿಕರಿಗೆ ಬಿದ್ದಿವೆ ಸತ್ತು
ಈ ಜೀವಂತ ನೆಲದ ಮೇಲೆ


ಇದರೊಂದಿಗೇ ಸದ್ದಿಲ್ಲದೇ
ಅಲ್ಲಿ ಈಗಷ್ಟೇ
ಹಿಡಿದು ತಂದ
ಮೀನಿನ ಜೀವದ ಜಿಗಿತ
ಆಗಷ್ಟೇ ಕಿತ್ತು ತಂದ
ಹಸಿ ಹಸಿ ಸೊಪ್ಪಿನ ಉಸಿರಾಟ
ಮನೆಯಿಂದಲೇ ಮೊಳಕೆಯೊಡೆಸಿ
ತಂದ ಕಾಳುಗಳ ಮೊಳೆತ
ಕಟ್ಟಿಟ್ಟ ಮಾಲೆಯ ಮೊಗ್ಗು
ಅಂಕೆಯಿಲ್ಲದೇ ಅರಳುತ್ತಾ…..


ನೀರಸ ಕೊಳುವ ಕೊಡುವ
ವ್ಯವಹಾರದ ಮಧ್ಯೆಯೂ
ಮೌನದಲಿ ನಡೆದೇ ಇದೆ
ಜೀವ ವ್ಯಾಪಾರ.


ಅವನಿ,
ಪಲ್ಲವಿಸುತ್ತಲೇ ಇದ್ದಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗತೀಕರಣ ಮತ್ತು ಸಿನಿಮಾ
Next post ಕಲಾ-ಮಹಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys